ಸೈಂಟ್ ಜಾನ್ ಥ್ಯಾಕರೆ (೧೭೭೮ – ೧೮೨೪) ಒಬ್ಬ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಆಗಿದ್ದನು. ಇವನು ೧೮೨೦ ರ ಸಮಯದಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗಾಗಿ ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದನು. == ಆರಂಭಿಕ ಜೀವನ == ಸೈಂಟ್ ಜಾನ್ ಥ್ಯಾಕರೆ ಅವನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ದಕ್ಷಿಣ ಮಹ್ರತ್ತಾ ದೋಬ್ ಪ್ರದೇಶಕ್ಕಾಗಿ ಕಲೆಕ್ಟರ್ ಮತ್ತು ರಾಜಕೀಯ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದನು ಮತ್ತು ಮದ್ರಾಸ್ ಸಿವಿಲ್ ಸೇವೆಗೆ ಸೇರಿದವನಾಗಿದ್ದನು. == ಕಿತ್ತೂರಿನ ಮೇಲೆ ದಾಳಿ == === ಹಿನ್ನೆಲೆ === ೧೫೮೫ ರಲ್ಲಿ ದೇಸಾಯಿ ಸ್ಥಾಪಿಸಿದ ಕಿತ್ತೂರು ಸಾಮ್ರಾಜ್ಯವನ್ನು ಆಳುತ್ತಿದ್ದ ಮಕ್ಕಳಿಲ್ಲದ ಮಲ್ಲಸರ್ಜನು ಕಿತ್ತೂರು ಚೆನ್ನಮ್ಮಳನ್ನು ರಾಣಿಯನ್ನಾಗಿ ಮಾಡಿದನು. ಮಲ್ಲಸರ್ಜನು ೧೮೨೪ ರಲ್ಲಿ ನಿಧನನಾದನು, ಮತ್ತು ಸಾಯುವ ಮೊದಲು ಅವನು ಒಬ್ಬ ಹುಡುಗನನ್ನು ದತ್ತು ಪಡೆದನು. ಇದು ಸೈಂಟ್ ಜಾನ್ ಥ್ಯಾಕರೆ ಒಪ್ಪದಿದ್ದ ಸತ್ಯ. ದತ್ತು ಸ್ವೀಕಾರವು ಸುಳ್ಳು ಅಥವಾ ನಕಲಿ ಎಂಬ ವಾದವನ್ನು ಹಿಡಿದುಕೊಂಡು, ಥ್ಯಾಕರೆ ಕಿತ್ತೂರಿಗೆ ಬಂದನು. ಆಗಮಿಸಿದ ನಂತರ, ಥ್ಯಾಕರೆ ಕಿತ್ತೂರು ಪ್ರದೇಶವನ್ನು ಆಳಲು ಪ್ರಯತ್ನಿಸಿದನು. ಅದರ ಒಡವೆ ಮತ್ತು ಆಭರಣಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಯತ್ನದಲ್ಲಿ ಅವನು ಖಜಾನೆಗೆ ಮೊಹರು ಹಾಕಿದನು. ಕಿತ್ತೂರು ಚೆನ್ನಮ್ಮ ಅದನ್ನು ಪ್ರತಿಭಟಿಸಿ ಕೋಟೆ ಬಾಗಿಲು ಮುಚ್ಚಿದಳು. ಥ್ಯಾಕರೆ ಬಾಗಿಲನ್ನು ಸ್ಫೋಟಿಸುವ ಆದೇಶವನ್ನು ನೀಡಿದನು. ಈ ಮಧ್ಯೆ, ಚೆನ್ನಮ್ಮನ ಸೈನಿಕರೊಬ್ಬನು ಥ್ಯಾಕರೆಗೆ ಗುಂಡು ಹಾರಿಸಿದನು. === ಸಾವು === ಸೈಂಟ್ ಜಾನ್ ಥ್ಯಾಕರೆ ೨೩ ಅಕ್ಟೋಬರ್ ೧೮೨೪ ರಂದು ಕರ್ನಾಟಕದ ಕಿತ್ತೂರಿನಲ್ಲಿ ಕಿತ್ತೂರಿನ ರಾಣಿ ಕಿತ್ತೂರು ಚೆನ್ನಮ್ಮನ ವಿರುದ್ಧ ಯುದ್ಧ ಮಾಡುವಾಗ ಕೊಲ್ಲಲ್ಪಟ್ಟನು. ಅವನು ಇತರ ಪಡೆಗಳೊಂದಿಗೆ ಅಸಮರ್ಪಕ ವಿಧಾನಗಳೊಂದಿಗೆ ಕಿತ್ತೂರಿನ ಕೋಟೆಯ ಪಟ್ಟಣವನ್ನು ಪ್ರವೇಶಿಸಲು ಪ್ರಯತ್ನಿಸಿದನು. ಮೊದಲು ಕೋಟೆಯತ್ತ ಸವಾರಿ ಮಾಡುತ್ತಿದ್ದ ಆತನ ಹೊಟ್ಟೆಗೆ ಗುಂಡು ತಗುಲಿ ನಂತರ ಕಿತ್ತೂರಿನ ಸೈನಿಕನು ಕತ್ತಿವರಸೆಯಿಂದ ಆತನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಕಿತ್ತೂರು ಚೆನ್ನಮ್ಮನ ಲೆಫ್ಟಿನೆಂಟ್‌ಗಳಲ್ಲಿ ಒಬ್ಬರಾದ ಬಾಳಪ್ಪ ಥ್ಯಾಕರೆಯ ಹತ್ಯೆಯಲ್ಲಿ ಭಾಗಿಯಾಗಿದ್ದನು. === ಸ್ಮಾರಕ === ಥ್ಯಾಕರೆಯ ಸ್ಮರಣಾರ್ಥ ಧಾರವಾಡದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. == ಉಲ್ಲೇಖಗಳು ==